ಉಚಿತ ಅರೋಗ್ಯ ತಪಾಸಣಾ ಶಿಬಿರ, ಉಪ್ಪುಂದ

ಉಚಿತ ಅರೋಗ್ಯ ತಪಾಸಣಾ ಶಿಬಿರ, ಉಪ್ಪುಂದ

ಉದ್ಘಾಟನೆ ಉಪ್ಪುಂದ ಚಂದ್ರಶೇಖರ ಹೊಳ್ಳರಿಂದ ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಸುಬ್ರಾಯ ಅಡಿಗರಿಂದ ಸ್ವಾಗತ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ. Dr. ನಾಗರಾಜ್ ಎಸ್ ರಿಂದ ಪ್ರಾಸ್ತಾವಿಕ ಭಾಷಣ, ಮುಖ್ಯ ಅತಿಥಿ ಚಂದ್ರಶೇಖರ ಹೊಳ್ಳರು ದೀಪ ಬೆಳಗಿಸಿ ಉದ್ಘಾಟಿಸಿ ವೈದ್ಯಕೀಯ ಶಿಬಿರಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕುಂದಾಪುರ ತಾಲೂಕು ಗ್ರಾಮೀಣ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಅಧ್ಯಕ್ಷರಾದ ಶ್ರೀ ಅರುಣ್ ಶಾನುಭೋಗ್, ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ನಾಗೇಶ ಹೆಬ್ಬಾರ್, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರತ್ನಾಕರ ಉಡುಪ, ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿವೇಕ್ ಯು, ನಿರ್ದೇಶಕರಾದ ರೋಟೆರಿಯನ್ ಸುಪ್ರೀತ್ ಚಾತ್ರ, ಬ್ರಾಹ್ಮಿ ಸುವಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶ್ರೀ ಶ್ರೀಕರ ಪುರಾಣಿಕ ಉಪಸ್ಥಿತರಿದ್ದರು. ರೊಟೇರಿಯನ್ ಸುರೇಶ್ ಮಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೊಟೇರಿಯನ್ ರಮಾನಂದ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವೈದ್ಯರುಗಳಾದ Dr. ವಿಜಯೇಂದ್ರ ಭಟ್, Dr. ಸಹನಾ ಕಾಮತ್, Dr. ವಿದ್ಯಾಬಲ್ಲಾಳ್, Dr ಅರುಣ್ ಕುಮಾರ್, Dr ಚಿತ್ರಲೇಖ, Dr ರಾಧಿಕಾ ಆಗಮಿಸಿದ 200ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿದರು ಜೊತೆಯಲ್ಲಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು